Posted on May 22, 2008 by neelanjana
ಪಲ್ಲವಿ
ಹರಿ ಸ್ಮರಣೆ ಮಾಡೋ ನಿರಂತರ ಪರಗತಿಗೆ ಇದು ನಿರ್ಧಾರ
ಚರಣ
1. ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತ ರಕ್ಷಕ ಪಾವನ ನೀ
2. ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ ದುರುಳ ಹಿರಣ್ಯಕನುದರವ ಸೀಳಿದ
3. ತರುಣಿ ದ್ರೌಪದಿ ಮೊರೆಯಿಡಲಾಕ್ಷಣ ಭರದಿಂದಕ್ಷಯವಿತ್ತ ಮಹಾತ್ಮನ
4. ಅಂದು ಅಜಾಮಿಳ ಕಂದನ ಕರೆಯಲು ಬಂದು ಸಲಹಿ ಆನಂದವ ತೋರಿದ
5. ಶ್ರೀಶ ಪುರಂದರ ವಿಟ್ಠಲ ರಾಯನ ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
Filed under: ಹ | No Comments »
Posted on May 2, 2008 by neelanjana
ಪಲ್ಲವಿ:
ಹೂ ಬೇಕೆ ಪರಿಮಳದಾ?
ಪರಮ ಪುರುಷ ನಮ್ಮ ಕೃಷ್ಣನ ತೋಟದ!
ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ
ಮಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲ ವಿಧದ ಮನಕ್ಲೇಶವ ಕಳೆಯುವ
ಪುಲ್ಲನಾಭ ನಮ್ಮ ಕೃಷ್ಣನ ತೋಟದ! || ಹೂ ಬೇಕೆ ?||
ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿಕೇರಿಯಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಲೆಯಿದ
ಮಾರಿದ್ದು ಪೇಳಿದ್ದ ಶೌರಿಯ ಸೊಬಗಿನ || ಹೂ ಬೇಕೆ ?||
ರಂಗುರಂಗುಗಳಿಂದ ಕಂಗೊಳಿಸುವ ಧ್ವಜ
ಬಂಗಾರದ ಕವಿ ಸಂಗ್ರಹಿಸುವ
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
ಅಂಘ್ರಿಯೊಳ್ ಸಂಗದೆ ಮಂಗಳಕರವಾದ || ಹೂ ಬೇಕೆ ?||
(ಇದು ವ್ಯಾಸರಾಯರ ರಚನೆಯೆಂದು ತೋರುತ್ತದೆ)
Filed under: ಹ | 2 Comments »