ಪಲ್ಲವಿ:
ಹೂ ಬೇಕೆ ಪರಿಮಳದಾ?
ಪರಮ ಪುರುಷ ನಮ್ಮ ಕೃಷ್ಣನ ತೋಟದ!
ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ
ಮಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲ ವಿಧದ ಮನಕ್ಲೇಶವ ಕಳೆಯುವ
ಪುಲ್ಲನಾಭ ನಮ್ಮ ಕೃಷ್ಣನ ತೋಟದ! || ಹೂ ಬೇಕೆ ?||
ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿಕೇರಿಯಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಲೆಯಿದ
ಮಾರಿದ್ದು ಪೇಳಿದ್ದ ಶೌರಿಯ ಸೊಬಗಿನ || ಹೂ ಬೇಕೆ ?||
ರಂಗುರಂಗುಗಳಿಂದ ಕಂಗೊಳಿಸುವ ಧ್ವಜ
ಬಂಗಾರದ ಕವಿ ಸಂಗ್ರಹಿಸುವ
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
ಅಂಘ್ರಿಯೊಳ್ ಸಂಗದೆ ಮಂಗಳಕರವಾದ || ಹೂ ಬೇಕೆ ?||
(ಇದು ವ್ಯಾಸರಾಯರ ರಚನೆಯೆಂದು ತೋರುತ್ತದೆ)
Filed under: ಹ
…
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
…
ಪ್ರಸನ್ನ -> ಶ್ರೀ ವಿದ್ಯಾಪ್ರಸನ್ನತೀರ್ಥರ ಕೃತಿ ಇರಬೇಕು.
ಪ್ರಭು,
ಮಾಹಿತಿಗಾಗಿ ಧನ್ಯವಾದಗಳು.